Aparanji
ಇಪ್ಪತ್ತೈದು ವರ್ಷಗಳ ಕಾಲ ಕನ್ನಡ
ನಗೆ ರಸಿಕರನ್ನು ರಂಜಿಸಿ ಕಾಡಿಗೆ ತೆರಳಿದ ಕೊರವಂಜಿ, ಈಗ
ಅಪರಂಜಿಯಾಗಿ ಅಂತರ್ಜಾಲಕ್ಕೆ ಆಗಮಿಸಿದ್ದಾಳೆ. ಬರಮಾಡಿಕೊಳ್ಳಿ.
 
ನಮ್ಮ ಟ್ರಸ್ಟಿಗಳು

Shivakumar ಎಂ.ಶಿವಕುಮಾರ್
ನಿರ್ವಾಹಕ ಟ್ರಸ್ಟಿ ಹಾಗೂ ಅಪರಂಜಿ ಸಂಪಾದಕರು
ನಂ.೩೬, ೬ನೇ ಮುಖ್ಯ ರಸ್ತೆ,
ಮಲ್ಲೇಶ್ವರಮ್, ಬೆಂಗಳೂರು ೫೬೦೦೦೩
ಜಂಗಮವಾಣಿ: 9845825061
ಅಂತರ್ಜಾಲ ಅಂಚೆ: aparanji@hotmail.com


ವೃತ್ತಿಯಲ್ಲಿ ಇಂಜಿನಿಯರು. ಸಾಹಿತ್ಯ ಇವರ ಪ್ರವೃತ್ತಿ. ಅಪರಂಜಿ ಪತ್ರಿಕೆಯ ಸಂಪಾದಕರು. ವಿವಿಧ ಪ್ರಕಾರಗಳ ಹನ್ನೆರಡು ಪುಸ್ತಕಗಳನ್ನು ಇವರು ಬರೆದಿದ್ದಾರೆ. ಇವರು ಬರೆದಿರುವ "ಯಂತ್ರ ಕಥೆ" ಮತ್ತು "ಮಧು ಚಂದ್ರ" ಪುಸ್ತಕಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಅಗಸ್ತ್ಯ ಅಂತರರಾಷ್ಟ್ರೀಯ ಸಂಸ್ಥೆ ಎಂಬ ಸಾರ್ವಜನಿಕ ಸೇವಾ ಸಂಸ್ಥೆಯಲ್ಲಿ ಇವರು ತಾಂತ್ರಿಕ ವಿಷಯಗಳಿಗೆ ಗೌರವ ಸಲಹೆಗಾರರಾಗಿದ್ದಾರೆ.

Shivakumar ಬೇಲೂರು ರಾಮಮೂರ್ತಿ
ಟ್ರಸ್ಟಿ
ಸುಕೇಶವ ೯೬, ೨ನೇ ಅಡ್ಡ ರಸ್ತೆ, ೨೦ನೇ ಮುಖ್ಯ ರಸ್ತೆ
ಭಿಟಿಎಂ ೧ ನೇ ಹಂತ, ಬೆಂಗಳೂರು ೫೬೦೦೬೮
ದೂ: 080 26688488 ಜಂಗಮವಾಣಿ: 9886061400
ಅಂತರ್ಜಾಲ ಅಂಚೆ: belururamamurthy@gmail.com


ಸುಮಾರು ೪೦ ವರ್ಷಗಳಿಂದ ಸಾಹಿತ್ಯ ಸೇವೆಯಲ್ಲಿರುವ ಬೇಲೂರು ಅವರ ಲೇಖನಗಳು ಕನ್ನಡದ ಅನೇಕ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ವೃತ್ತಿಯಿಂದ ಆಡಳಿತ ಸಲಹೆಗಾರರು. ಮತ್ತು ಲೆಕ್ಕ ಪರಿಶೋಧಕರಾಗಿರುವ ಇವರು ಆಕಾಶವಾಣಿ ಮತ್ತು ದೂರದರ್ಶನದ ಕಲಾವಿದರೂ ಹೌದು. ಅಪರಂಜಿ ಪತ್ರಿಕೆಯ ಉಪಸಂಪಾದಕರಾಗಿರುವುದರ ಜೊತೆಗೆ ನಮ್ಮ ಟ್ರಸ್ಟ್ನ ಕಾರ್ಯಕ್ರಮವಾದ ಹಾಸ್ಯೋತ್ಸವದ ಪ್ರಮುಖ ರೂವಾರಿ.

Shivakumar ವಿ.ಆರ್. ನಾಥ್
ಟ್ರಸ್ಟಿ
ರವಿ ಗ್ರಾಫಿಕ್ಸ್ ೫೩/೮, ೨ನೇ ಮುಖ್ಯ ರಸ್ತೆ
ಇಂಡಸ್ಟ್ರಿಯಲ್ ಟೌನ್, ಬೆಂಗಳೂರು ೫೬೦೦೪೪
ಜಂಗಮವಾಣಿ: 9845014441


ವೃತ್ತಿಯಲ್ಲಿ ಮುದ್ರಕರು. ಅಪರಂಜಿ ಪತ್ರಿಕೆಯ ಮುದ್ರಣ ವ್ಯವಸ್ಥೆಯನ್ನು ಬಹು ಅಚ್ಚುಕಟ್ಟಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಮಲ್ಲೇಶ್ವರಮ್ ಆರ್ಯ ವೈಶ್ಯ ಸಂಘ ಮತ್ತು ಇತರ ಸಾರ್ವಜನಿಕ ಸೇವಾ ಸಂಸ್ಥೆಗಳಲ್ಲಿ ಇವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

Shivakumar ಎಚ್.ಎನ್. ಆನಂದ
ಟ್ರಸ್ಟಿ
ನಂ. ೪೯, ಎಇಸಿಎಸ್ ಲೇಔಟ್ ಎರಡನೇ ಹಂತ ಮೂರನೇ ಮುಖ್ಯ ರಸ್ತೆ
ಸಂಜಯನಗರ ಬೆಂಗಳೂರು ೫೬೦೦೯೪
ಜಂಗಮವಾಣಿ: 9916743384


ಸುಧಾ, ಪ್ರಜಾವಾಣಿ ಇಂಡಿಯನ್ ಎಕ್ಸ್ಪ್ರೆಸ್ ಮತ್ತು ಟೈಂಸ್ ಆಫ್ ಇಂಡಿಯಾ ಪತ್ರಿಕೆಗಳಲ್ಲಿ ದುಡಿದ ಎಚ್.ಎನ್. ಆನಂದ ಅವರಿಗೆ ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೋದ್ಯಮದಲ್ಲಿ ಅಪಾರ ಅನುಭವ. ಜೊತೆಗೆ ಸದಭಿರುಚಿಯ ಹಾಸ್ಯದಲ್ಲಿ ಆಸಕ್ತಿ. ಸ್ವತಃ ಬರಹಗಾರರೂ ಸಹ. ಸುಧಾ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಅವರ ಅಂಕಣ "ವಾರೆನೋಟ" ಅಪಾರ ಜನಪ್ರಿಯ.

Shivakumar ಕೆ. ರವೀಂದ್ರ ರಾವ್
ಟ್ರಸ್ಟಿ
ನಂ. 17 ಮಿಷನ್ ರಸ್ತೆ (ಕಾರ್ ಕೆಂಪ್ ಮಹಡಿ)
ಬೆಂಗಳೂರು ೫೬೦೦೨೭
ಸ್ಥಾವರ ವಾಣಿ: 080 22225633


ಅಪರಂಜಿ ಪತ್ರಿಕೆಯ ಡಿ. ಟಿ. ಪಿ ಕೆಲಸವನ್ನು ತಮ್ಮ ಒಮೇಗಾ ಲೇಸರ್ ಟೆಕ್ ಸಂಸ್ಥೆಯ ಮೂಲಕ ಬಹು ಅಚ್ಚುಕಟ್ಟಾಗಿ ಮುದ್ರಿಸಿಕೊಂಡು ಬರುತ್ತಿರುವ ಕೆ. ರವೀಂದ್ರ ರಾವ್ ಅವರು ಅಪರಂಜಿ ಪತ್ರಿಕೆಯ ಬಹು ದಕ್ಷ ಸಹಾಯಕರಲ್ಲಿ ಒಬ್ಬರು. ನಮ್ಮ ಟ್ರಸ್ಟ್ ನಡೆಸಿಕೊಂಡು ಬರುತ್ತಿರುವ ವಾರ್ಷಿಕ ಹಾಸ್ಯೋತ್ಸವ ಕಾರ್ಯಕ್ರಮಗಳ ಬೆನ್ನೆಲುಬು ಇವರು ಎನ್ನಬಹುದು.

Shivakumar ಸಿ. ಆರ್. ಸತ್ಯ
ಟ್ರಸ್ಟಿ
ನo. ೪೮, "ಸೌಮ್ಯ ಶ್ರೀ" ಎಂ. ಎಸ್. ಎಚ್ ಎರಡನೇ ಹಂತ
ಆನಂದ ನಗರ ಹೆಬ್ಬಾಳ ಬೆಂಗಳೂರು ೫೬೦೦೨೪
ಜಂಗಮವಾಣಿ: 9945744972


ವೃತಿಯಲ್ಲಿ ಇಂಜಿನಿಯರ್ ಆಗಿರುವ ಶ್ರೀ ಸತ್ಯ ಅವರು ಅನೇಕ ಸಂಘ ಸಂಸ್ಥೆಗಳಲ್ಲಿ ಕೆಲಸಮಾಡುತ್ತಿದರೆ. ಥೋರೋ ಫೌಂಡೇಶನ್, ಶಿವರಾಮಕಾರಂತ ವೇದಿಕೆ, ಅವುಗಳ ಸ್ಥಾಪಕ ಸದಸ್ಯರು. ಕನ್ನಡ ವಿಜ್ಞಾನ ಪರಿಷತ್ತಿನ ಸಕ್ರಿಯ ಸದಸ್ಯರು. ಇಂಡಿಯನ್ ಸೊಸೈಟಿ ಫಾರ್ ದ ಅಡ್ವಾನ್ಸ್ ಮೆಂಟ್ ಆಫ್ ಮೆಟೀರಿಯಲ್ಸ್ ನ ವೃತ್ತಿಪರ ಸದಸ್ಯರು

 
ಸಂಪಾದಕ ಮಂಡಳಿ

ಶ್ರೀ ಎಂ.ಶಿವಕುಮಾರ್, ಶ್ರೀ ಬೇಲೂರು ರಾಮಮೂರ್ತಿ ಮತ್ತು ಶ್ರೀ ಎಚ್.ಎನ್. ಆನಂದ ಅವರುಗಳ ಜೊತೆಗೆ ಶ್ರೀ ಎಚ್. ಗೋಪಾಲಕೃಷ್ಣ ಅವರು ಸಂಪಾದಕ ಮಂಡಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

Shivakumar ಎಚ್. ಗೋಪಾಲಕೃಷ್ಣ
ಸಾಹಿತಿ, ನಗೆ ಬರಹಗಾರ ಗೋಪಾಲಕೃಷ್ಣ ಅವರು ನಾಡಿನ ಎಲ್ಲ ಪತ್ರಿಕೆಗಳಿಗೂ ತಮ್ಮ ಲೇಖನಗಳನ್ನು ನೀಡಿದ್ದಾರೆ. ಇವರ ಒಂದು ಕಥಾ ಸಂಕಲನಕ್ಕೆ ಮಾಸ್ತಿ ದತ್ತಿ ಬಹುಮಾನ ದೊರಕಿದೆ. ಹಾಸ್ಯ ಬ್ರಹ್ಮ ಟ್ರಸ್ಟ್ ಮತ್ತು ಕೊರವಂಜಿ ಅಪರಂಜಿ ಟ್ರಸ್ಟ್ಗಳ ಮೂಲಕ ಇವರು ಹಾಸ್ಯ ಪ್ರಸಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

 
ಗೌರವ ಸಲಹೆಗಾರರು

Shivakumar ಆರ್. ಶೇಷಗಿರಿರಾವ್
ನಂ. ೧೯೯, ೪ನೇ ಮುಖ್ಯ ರಸ್ತೆ, ೨ನೇ ಅಡ್ಡ ರಸ್ತೆ,
ಹೆಬ್ಬಾಳ್ ಕೆಂಪಾಪುರ. ಕಾಫಿಬೋರ್ಡ್ ಲೇಔಟ್,
ಬೆಂಗಳೂರು ೫೬೦೦೨೪
ಸ್ಥಾವರ ವಾಣಿ: 080 23630475


ವೃತ್ತಿಯಲ್ಲಿ ಶಿಕ್ಷಕರಾಗಿರುವ ಶೇಷಗಿರಿ ರಾವ್ ಅವರು ಅಪರಂಜಿ ಪತ್ರಿಕೆಯ ಮೊದಲ ಸಂಪಾದಕರು. ಇವರು ಮರಾಠಿ ಭಾಷೆಯಿಂದ ಅನೇಕ ಲೇಖನಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಉತ್ತಮ ಕಲಾವಿದರು ಹಾಗೂ ರಂಗಭೂಮಿಯ ಕಲೆಗಳಲ್ಲಿ ಪರಿಣಿತರು.