Aparanji
ಇಪ್ಪತ್ತೈದು ವರ್ಷಗಳ ಕಾಲ ಕನ್ನಡ
ನಗೆ ರಸಿಕರನ್ನು ರಂಜಿಸಿ ಕಾಡಿಗೆ ತೆರಳಿದ ಕೊರವಂಜಿ, ಈಗ
ಅಪರಂಜಿಯಾಗಿ ಅಂತರ್ಜಾಲಕ್ಕೆ ಆಗಮಿಸಿದ್ದಾಳೆ. ಬರಮಾಡಿಕೊಳ್ಳಿ.
ಕೊರವಂಜಿ ಅಪರಂಜಿ ಟ್ರಸ್ಟಿನ ಕಾರ್ಯಕ್ರಮಗಳ ಚಿತ್ರ ಸಂಪುಟಗಳು

 

album ಕೊರವಂಜಿ ಅಪರಂಜಿ ಟ್ರಸ್ಟ್ - ಹಾಸ್ಯೋತ್ಸವ ೨೦೦೯

ಸಂಸ್ಕರಣೆ - ಡಾ.ಎಚ್ . ಕೇ. ರಂಗನಾಥ್
ಮುಖ್ಯ ಅತಿಥಿ - ಪ್ರೊ ಜಿ . ವೆಂಕಟಸುಬ್ಬಯ್ಯ
ಡಾ. ರಂಗನಾಥ್ ಬಗ್ಗೆ - ಶ್ರೀಮತಿ ಯಮುನಾ ಮೂರ್ತಿ.
ಡಾ . ರಂಗನಾಥರ ವೈಶಿಷ್ಟ್ಯ - ಸಿ . ಏನ್ ಕೃಷ್ಣಮಾಚಾರ್
ರಾಜಕೀಯದಲ್ಲಿ ಹಾಸ್ಯ - ಶ್ರೀ ಏನ್. ಸುರೇಶ ಕುಮಾರ್
ಹಾಸ್ಯ ರಂಜನೆ - ಪ್ರೊ .ಕೃಷ್ಣೆ ಗೌಡ
ನಮ್ಮ ಮನದಲ್ಲಿ ನಮ್ಮ ತಂದೆ - ಶ್ರೀಮತಿ ಅಂಜನ
ಕುಂಚದಲ್ಲಿ ಕೊಂಚ ನಗೆ - ಶ್ರೀ ಬಾಗುರ್ ಮಾರ್ಕಂಡೇಯ
ಶ್ರೀ ಕು ಗೋ ( ಎಚ್ .ಗೋಪಾಲ ಭಟ್ಟ ) ಅವರಿಗೆ ಅಭಿನಂದನೆ ಮತ್ತು ಸನ್ಮಾನ .
ಗಾನವಿನೋದಿನಿ ತಂಡದಿಂದ ಹಾಸ್ಯ, ಗಾನ, ವೈವಿಧ್ಯ, ಮತ್ತು ಹಾಸ್ಯ ತುಣುಕುಗಳು .

 

album ಕೊರವಂಜಿ ಅಪರಂಜಿ ಟ್ರಸ್ಟ್ - ಹಾಸ್ಯೋತ್ಸವ ೨೦೧೦

ಸಂಸ್ಕರಣೆ - ಡಾ . ಎಚ್ . ನರಸಿಂಹಯ್ಯ
ಮುಖ್ಯ ಅತಿಥಿ - ಶ್ರೀಮತಿ. ಬಿ . ಜಯಶ್ರೀ ( ಹಿರಿಯ ರಂಗಕರ್ಮಿ ಮತ್ತು ರಾಜ್ಯ ಸಭಾ ಸದಸ್ಯರು )
ಎಚ್. ಏನ್ . ನೆನಪು - ಶ್ರೀ ಏ. ಎಚ್. ರಾಮರಾವ್
ರಂಗ ಹಾಸ್ಯ - ಪ್ರೊ .ಲಕ್ಷ್ಮಿ ಚಂದ್ರಶೇಕರ್.
ಹರಿಕತೆಯಲ್ಲಿ ಹಾಸ್ಯ - ಶ್ರೀಮತಿ. ಶೋಭಾ ನಾಯ್ಡು
ಜಾನಪದ ಹಾಸ್ಯ - ಪ್ರೊ. ಎಂ. ಕೃಷ್ಣೆ ಗೌಡ.
ಜಾನಪದ ಸೊಗಡು - ಶ್ರೀ. ಅಪ್ಪಗೆರೆ ತಿಮ್ಮರಾಜು
ಸಂಗೀತದಲ್ಲಿ ಹಾಸ್ಯ - ಶ್ರೀ. ವೈ . ವಿ . ಗುಂಡುರಾವ್
ಶ್ರೀ ವೈ .ಎಂ . ಏನ್ . ಮೂರ್ತಿ ಅವರಿಗೆ ಸನ್ಮಾನ ಹಾಗೂ ಗೌರವಾರ್ಪಣೆ .
ಗಾನವಿನೋದಿನಿ ತಂಡದಿಂದ ಹಾಸ್ಯ ಗೀತೆ ಹಾಗೂ ಹಾಸ್ಯ ತುಣುಕುಗಳು.

 

album ಕೊರವಂಜಿ ಸಿ. ಡಿ. ಬಿಡುಗಡೆ ಮತ್ತು ಅಪರಂಜಿ ಅಂತರ್ಜಾಲ ತಾಣದ ಉದ್ಘಾಟನೆ

ಮೊನ್ನೆ ಮಾರ್ಚ್ ಇಪ್ಪತ್ತೇಳರಂದು ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಅದ್ಧೂರಿ ಸಮಾರಂಭವೊಂದು ನಡೆಯಿತು. ಕೊರವಂಜಿ ಮಾಸಪತ್ರಿಕೆಯ ೨೫ ವರ್ಷಗಳ ಎಲ್ಲಾ ಸಂಚಿಕೆಗಳನ್ನೊಳಗೊಂಡ ಸಿ.ಡಿ., ಹಾಗೂ ಅಪರಂಜಿ ಮಾಸಪತ್ರಿಕೆಯ ಅಂತರ್ಜಾಲ ತಾಣದ ಉದ್ಘಾಟನೆ ಇವುಗಳನ್ನು ಹಮ್ಮಿಕೊಂಡ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತೀಯ ವಿದ್ಯಾಭವನದ ಅಧ್ಯಕ್ಷರಾದ ಶ್ರೀ ಎನ್. ರಾಮಾನುಜ ಅವರು ವಹಿಸಿದ್ದರು. ಸಮಾರಂಭಕ್ಕೆ ಆಗಮಿಸಿದ್ದ ಸಭಿಕರನ್ನು ಅಪರಂಜಿ ಪತ್ರಿಕೆಯ ಸಂಪಾದಕರಾದ ಶ್ರೀ ಎಂ. ಶಿವಕುಮಾರ್ ಸ್ವಾಗತಿಸಿದ ನಂತರ, ಮಾನ್ಯ ಪ್ರೊ. ಜಿ. ವೆಂಕಟಸುಬ್ಬಯ್ಯನವರು ಸಿ.ಡಿ. ಯನ್ನು ಬಿಡುಗಡೆ ಮಾಡಿದರು. ಅಂತರ್ಜಾಲ ತಾಣದ ಉದ್ಘಾಟನೆಯನ್ನು ಕೆನರಾ ಬ್ಯಾಂಕಿನ ನಿರ್ವಾಹಕ ನಿರ್ದೇಶಕರಾದ ಶ್ರೀ ಜಗದೀಶ ಪೈ ಅವರು ನೆರವೇರಿಸಿದರು. ಸರ್ವಶ್ರೀ ಮನು ಬಳಿಗಾರ್, ಅ.ರಾ.ಮಿತ್ರ, ಗುರುರಾಜ ಕರ್ಜಗಿ ಹಾಗೂ ಶ್ರೀನಿವಾಸ ವೈದ್ಯ ಇವರುಗಳ ಚೇತೋಹಾರಿ ಮಾತುಗಳು ಸಭಿಕರನ್ನು ರಂಜಿಸುವಲ್ಲಿ ಯಶಸ್ವಿಯಾದವು. ಅಪರಂಜಿ ಮಾಸಪತ್ರಿಕೆಯ ಉಪ ಸಂಪಾದಕರಾದ ಶ್ರೀ ಬೇಲೂರು ರಾಮಮೂರ್ತಿಯವರು, ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿದರು. ಕಾರ್ಯಕ್ರಮವನ್ನು ನಡೆಸಲು ಸಹಾಯ ಹಸ್ತ ನೀಡಿದ ಭಾರತೀಯ ವಿದ್ಯಾಭವನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರುಗಳಿಗೆ ಅಪರಂಜಿ ಬಳಗದ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳು.